<p><em><strong>ದೇಶದ ಉದ್ದಗಲಕ್ಕೂ ಚರ್ಚೆಯಾಗುತ್ತಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಜತೆಜತೆಗೆ ಇನ್ನೂ ಹಲವಾರು ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಗರಣದ ಬಗ್ಗೆ ದೇಶದ ಸುದ್ದಿ ಮಾಧ್ಯಮಗಳು ಪ್ರತಿನಿತ್ಯ ಒಂದಿಲ್ಲೊಂದು ವಿಷಯವನ್ನಿಡಿದು ಜನರ ಮುಂದೆ ಬರುತ್ತಿವೆ. ತನಿಖೆಯ ಕ್ಷಣಕ್ಷಣದ ಮಾಹಿತಿ, ಸಂಕ್ಷಿಪ್ತ ಸುದ್ದಿ, ವಿವರಣಾತ್ಮಕ ಲೇಖನ, ಅಂಕಣ, ಸ್ಪೆಷಲ್ ಸೀರೀಸ್, ಹೀಗೆ ಹಲವಾರು ನಮೂನೆಗಳಲ್ಲಿ ಹಗರಣದ ಮಾಹಿತಿಗಳನ್ನು ಬಿತ್ತರಿಸುತ್ತಿದ್ದಾರೆ. ಈ ಮಧ್ಯೆ ಗಮನ ಸೆಳೆಯುತ್ತಿರುವುದು ಹಗರಣದ ಕುರಿತಾದ ವ್ಯಂಗ್ಯ ಚಿತ್ರಗಳು.</strong></em></p>.<p>ಹಲವಾರು ಸಾಲುಗಳ ಮಾಹಿತಿಯನ್ನು ಒಂದೊಂದೇ ವ್ಯಂಗ್ಯ ಚಿತ್ರಗಳು ಕಟ್ಟಿಕೊಡುತ್ತವೆ. ಹಗರಣದ ಹಿನ್ನಲೆ, ಮೊತ್ತ, ಆರೋಪಿ, ಹಗರಣ ನಡೆದ ರೀತಿಯನ್ನು ಕಣ್ಣಗೆ ಕಟ್ಟುವಂತೆ ಚಿತ್ರಿಸುವ ಈ ಕಾರ್ಟೂನ್ಗಳು, ಹಾಸ್ಯಪೂರಿತವಾಗಿ ವಿಷಯದ ಅಗಾಧತೆಯನ್ನು ಅರ್ಥ ಮಾಡಿಸುತ್ತವೆ. ಹೀಗೆ ನೀರವ್ ಮೋದಿಯ ಪಿಎನ್ಬಿ ಹಗರಣ ಕುರಿತಂತೆ ಕೆಲವು ಪ್ರಮುಖ ವ್ಯಂಗ್ಯ ಚಿತ್ರಗಳು ಇಲ್ಲಿವೆ…</p>.<p><strong>1. ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡ ಪಿ. ಮೊಹಮ್ಮದ್ರ ವ್ಯಂಗ್ಯ ಚಿತ್ರ.</strong></p>.<p><strong>2. ಇದು ಒನ್ ಇಂಡಿಯಾದಲ್ಲಿನ ವ್ಯಂಗ್ಯ ಚಿತ್ರ. ನೀರವ್ ಮೋದಿಗೆ ಸಾಲ ಕೊಟ್ಟ ಪಿಎನ್ಬಿಯ ಸಧ್ಯದ ಪರಿಸ್ಥಿತಿಯನ್ನು ಈ ಚಿತ್ರ ಪ್ರತಿಬಿಂಬಿಸುತ್ತಿದೆ.</strong></p>.<p><strong>3. ಸತೀಶ್ ಆಚಾರ್ಯ ಚಿತ್ರಿಸಿರುವ ವ್ಯಂಗ್ಯ ಚಿತ್ರವಿದು. ಪಿಎನ್ಬಿಗೆ ಮೋಸ ಮಾಡಲು ನೀರವ್ ಮೋದಿ ಬಳಸಿದ ‘ಲೆಟರ್ ಆಫ್ ಅಂಡರ್ಟೇಕಿಂಗ್’ಗಳನ್ನು ಇಲ್ಲಿ ಪ್ರೀತಿಯೊಂದಿಗೆ ಹೋಲಿಕೆ ಮಾಡಿದ್ದಾರೆ.</strong></p>.<p><strong>4. ಮಲಯಾಳ ಮನೋರಮಾದಲ್ಲಿ ಪ್ರಕಟಿತವಾಗಿರುವ ವ್ಯಂಗ್ಯ ಚಿತ್ರವಿದು. ಪ್ರಸ್ತುತ ಭಾರತವನ್ನು ಈ ಚಿತ್ರ ಪ್ರತಿಬಿಂಬಿಸುತ್ತಿದೆ.</strong></p>.<p><strong>5. ಪ್ರಿಯಾಂಕಾ ಗಾಂಧಿ ಟ್ವಿಟ್ಟರ್ನಲ್ಲಿ ದೊರೆತ ವ್ಯಂಗ್ಯ ಚಿತ್ರ. ಅನಾಣ್ಯೀಕರಣ ಮತ್ತು ಹಗರಣ, ಎರಡರ ಹೋಲಿಕೆ ಈ ಚಿತ್ರದಲ್ಲಿದೆ. ಸತೀಶ್ ಆಚಾರ್ಯ ಇದನ್ನು ಚಿತ್ರಿಸಿದ್ದಾರೆ.</strong></p>.<p><strong>6. ಇದು ಸತೀಶ್ ಆಚಾರ್ಯರ ಮತ್ತೊಂದು ವ್ಯಂಗ್ಯ ಚಿತ್ರ. ದೇಶದ ಬ್ಯಾಂಕ್ಗಳು ಅನುಸರಿಸುತ್ತಿರುವ ಬಡವ ಮತ್ತು ಶ್ರೀಮಂತ ಎಂಬ ಧೋರಣೆಯನ್ನು ಈ ಚಿತ್ರ ಕಟ್ಟಿಕೊಡುತ್ತದೆ.</strong></p>.<p><strong>7. ಈ ಚಿತ್ರ ಸಧ್ಯದ ಹೈಟೆಕ್ ದರೋಡೆಯನ್ನು ಪ್ರತಿಬಿಂಬಿಸುತ್ತದೆ.</strong></p>.<p><strong>8. ಸತೀಶ್ ಆಚಾರ್ಯ ಬರೆದಿರುವ ಈ ಚಿತ್ರ ನೀರವ್ ಮೋದಿ ಹಗರಣದ ಕುರಿತಾಗಿ ನರೇಂದ್ರ ಮೋದಿ ಅನುಸರಿಸುತ್ತಿರುವ ಮೌನ ಧೋರಣೆಯನ್ನು ಚಿತ್ರಿಸುತ್ತದೆ.</strong></p>.<p><strong>9. ಸತೀಶ್ ಆಚಾರ್ಯರ ಈ ಚಿತ್ರ ಸಮಸ್ಯೆಗೆ ಕೊನೆ ಹಾಡುವುದರ ಬದಲು ಹಿಂದಿನ ಸರಕಾರಗಳನ್ನು ದೂರುತ್ತಾ ಕುಳಿತಿರುವ ಮೋದಿ ಸರಕಾರವನ್ನು ವಿಢಂಬಿಸುತ್ತದೆ.</strong></p>.<p><strong>10. ಹೈಟೆಕ್ ಕಳ್ಳತನವನ್ನು ಈ ಚಿತ್ರ ಪ್ರತಿಬಿಂಬಿಸುತ್ತಿದೆ. ಸತೀಶ್ ಆಚಾರ್ಯರ ಚಿತ್ರವಿದು.</strong></p>.<p><strong>10. ಹೈಟೆಕ್ ಕಳ್ಳತನವನ್ನು ಈ ಚಿತ್ರ ಪ್ರತಿಬಿಂಬಿಸುತ್ತಿದೆ. ಸತೀಶ್ ಆಚಾರ್ಯರ ಚಿತ್ರವಿದು.</strong></p>.<p><strong>12. ನರೇಂದ್ರ ಮೋದಿಯ ಡಿಜಿಟಲೈಸೇಷನ್ ಮತ್ತು ದೊಡ್ಡ ಹಗರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಈ ಚಿತ್ರ ತಳಕುಹಾಕಿದೆ.</strong></p>